Saturday, August 20, 2011

ಅಣ್ಣಾ ವಿರೋದಿಗಳಿಂದ ಅಣ್ಣಾಗೊಂದು ಹಾಸ್ಯಾಸ್ಪದ ಸಲಹೆ

        ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಇದು ನಾವು ಕಳೆದ  ಹಲವು ದಶಕಗಳಿಂದ  ಕೇಳುತ್ತಿರುವ ಸತ್ಯ.(?). ಒಂದರ್ಥದಲ್ಲಿ ಇದು ನಿಜ, ಯಾವುದೇ ದೇಶದಲ್ಲಿ ನಮ್ಮಷ್ಟು ಮುಕ್ತವಾದ ಪ್ರಜಾಸತ್ತತೆ ಖಂಡಿತ ಇಲ್ಲ. ಇಲ್ಲಿ ಪ್ರಜೆಗಳೇ ಪ್ರಭುಗಳು. ಪ್ರತಿಯೊಂದನ್ನು ಪ್ರಜೆಯೇ ನಿರ್ಧರಿಸುತ್ತಾನೆ, ಎಂಬೆಲ್ಲ ಮಾತುಗಳಿವೆ ಆ ವಿಷಯಕ್ಕೆ ಆಮೇಲೆ ಬರೋಣ, ಏನೇ ಆದರು ನಮ್ಮ ಸಂವಿಧಾನ ವಿಶೇಷವಾದದ್ದು, ಪ್ರಜಾಸತ್ತಾತ್ಮಕವಾದ್ದು.
          ಆದರೆ ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಸಂವಿಧಾನ, ಅದರ ಸಮಾಜಮುಖಿಯಿಂದ ನಾವು ಗಳಿಸಿದ್ದಾದರೂ ಏನು,,,??

           ಸಂವಿಧಾನದ ಬಗ್ಗೆ ವಿಮರ್ಶೆಗಳು ಬಹಳ ನಡೆದಿರಬಹುದು, ಆದರೆ ಎಂದೂ ಅದರ weak point ತಿದ್ದುವ ಕೆಲಸ ನಡೆದಿಲ್ಲ,  ಪ್ರಜಾಪ್ರಭುತ್ವ ಎಂಬುದು ಒಳ್ಳೆಯ concept. ಆದರೆ ಅಲ್ಲಿ superior authority ಇಲ್ಲ. ಇಂದು ನಮ್ಮ ದೇಶಕ್ಕೆ ಬಂದಿರುವ ದುರ್ಗತಿ ಇದೆ ಕಾರಣದಿಂದ. ನಮ್ಮ ದೇಶಕ್ಕೆ ವೇಗವಾಗಿ ಅಭಿವೃದ್ಧಿ ಹೊಂದಲು ಈ ವಿಷಯ ಮಾರಕವಗ್ತಾ ಇದೆ.
          .                 ಜನಲೋಕಪಾಲ್ ಮಸೂದೆ ಸಂವಿಧಾನ ವಿರೋಧಿ ಎಂದು ಕೆಲವರ ಅಂಬೋಣ. ಯಾಕೆಂದರೆ ಇಡೀ ದೇಶವನ್ನು ಅದು control ಮಾಡಬಹುದು ಎಂಬ ಹೆದರಿಕೆಯಿಂದ. ಸಂವಿಧಾನ ಎಂಬುದು ಈ ದೇಶದ ಪ್ರಜೆಯಿಂದಲೇ ರಚಿಸಲ್ಪಟ್ಟಿದೆ. ಹಾಗೆ ಲೋಕಪಾಲ ಬಿಲ್ ಕೂಡ. ಸಂವಿಧಾನ ಸಂಪೂರ್ಣವಾಗಿ ಬ್ರಷ್ಟಾಚಾರ ತಡೆಯುವಲ್ಲಿ ವಿಫಲವಾದ್ದರಿಂದ ಈ ಬಿಲ್ ಜಾರಿಗಾಗಿ ಒತ್ತಯಮಾಡಲಾಗಿದೆ. ಎಲ್ಲವೂ ನಮ್ಮ ಅನುಕೂಲಕ್ಕಾಗಿ ನಮ್ಮ ಅಭ್ವ್ರಿದ್ಧಿಗಾಗಿಯೇ ಹೊರತು ಯಾವುದೇ ಲಾಭಿಗಲ್ಲ.  ಅಣ್ಣಾ ಹಜಾರೆ ಯನ್ನು ಒಬ್ಬ ಸರ್ವಧಿಕಾರಿಯೆಂದು ಕರೆಯವ ವರ್ಗಗಳು ಇಂದು ನಮ್ಮ ಮುಂದೆ ಇವೆ. ಅವುಗಳು ಅರ್ಥ ಮಾಡಿಕೊಳ್ಳಬೇಕಾದ ವಿಷಯ ಎಂದರೆ ಬ್ರಷ್ಟಚರವನ್ನು ತೊಲಗಿಸಲು ಸಂವಿಧಾನದಲ್ಲಿ ಈಗ ಇರುವ ಮಾರ್ಗಗಳು ಯಾವುವು? ಅವು ಎಷ್ಟರ ಮಟ್ಟಿಗೆ ಫಲಕಾರಿಯಗಿವೆ? ಇವು ಮುಂದೆ ಕೂಡ ಫಲಕಾರಿಯಗಬಲ್ಲುವೆ? 
                     ಲೋಕಪಾಲ ಬಿಲ್ ಯಾವುದೇ ಪ್ರಜೆಯ ಮೂಲಭೂತ ಹಕ್ಕನ್ನು ಕಸಿಯವುದಿಲ್ಲ, ಯಾರ ಬಾಳನ್ನೂ ಬೋಳು ಮಾಡುವುದಿಲ್ಲ ಈಗ ಜಾರಿಯಲ್ಲಿರುವ ಸಂವಿಧಾನಕ್ಕೆ ಅದು ಕಿಂಚಿತ್ತೂ ಧಕ್ಕೆ ಉಂಟುಮಾಡುವುದಿಲ್ಲ. ಕೇವಲ ಅನಾಚಾರಿಗಳಿಗೆ,ದೇಶದ್ರೋಹಿಗಳಿಗೆ ಅದು ಸಿಂಹಸ್ವಪ್ನ, ಹೀಗಿರುವಾಗ ಅದನ್ನು ವಿರೋದಿಸುವುದು ಯಾವ ಅರ್ಥದಲ್ಲಿ,,,?
         ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಯಾವುದೇ ಕೊರತೆಯಾಗದಂತೆ ಈ ಮಸೂದೆಯಲ್ಲಿ ನೋಡಿಕೊಳ್ಳಲಾಗಿದೆ. ಇದು ಪ್ರಜಾಪ್ರಭುತ್ವ ವಿರೋದಿ ಎಂಬುದು ಅರ್ಥಹೀನ ಮಾತು,, ಸಂವಿಧಾನದಿಂದ ಸಾಧ್ಯವಾಗದ್ದು ಇದರಿಂದ ಸಾಧ್ಯವಾಗಬಹುದು ಎಂಬುದು ನಮ್ಮ ಆಶಯ. 
     ಅಣ್ಣಾ ವಿರೋದಿಗಳಿಂದ ಅಣ್ಣಾಗೊಂದು ಹಾಸ್ಯಾಸ್ಪದ ಸಲಹೆ ಏನು ಗೊತ್ತೇ....?? ಅಣ್ಣಾ ರಾಜಕೀಯ ಪ್ರವೇಶಿಸಿ ಸಂಸತ್ತಿನಲ್ಲಿ ಕುಳಿತು ಆಮೇಲೆ ಬ್ರಷ್ಟಾಚಾರ ವಿರುದ್ಧ ಹೊರಾದಬೇಕಂತೆ,,,,,,,!!!!! ರಾಜಕೀಯ ಏನೆಂದು ಎಲ್ಲರಿಗೂ ಗೊತ್ತು. ಅಲ್ಲಿ ಸಾಧಿಸುವುದು ಏನು ಎಂದೂ ಗೊತ್ತು. ಈ ಮೊದಲು ದೇಶ ಉದ್ಧಾರ ಮಾಡಲು ರಾಜಕೀಯ ಸೇರಿದವರು ಏನಾದರು ಎಂದು ಕೂಡ ಗೊತ್ತು,ಹೀಗಿರುವಾಗ ಅಣ್ಣಾ ರಾಜಕೀಯ ಪ್ರವೇಶ ಎಷ್ಟು ಸಮಂಜಸ.....? ಹೊಲಸಿಗೆ ಇಳಿದು ಹೊಲಸು ತೊಳೆಯಲು ಸಾದ್ಯವೇ,,,,,,,,,,,??? ಮೈ ಎಲ್ಲ ಹೊಲಸಾದೀತು.
                          ಏನೇ ಆದರು ಭ್ರಷ್ಟಾಚಾರ ತೊಲಗಿಸುವುದು ನಮ್ಮ ಉದ್ದೇಶ, ತೊಲಗಿಸಲು ಸಕಲ ಪ್ರಯತ್ನಗಳನ್ನೂ ನಾವು ಮಾಡುತ್ತೇವೆ,,, ಎಂದಿಗೂ ಅಣ್ಣಾ ಬೆನಿಗೆ ನಿಂತು ದೇಶವನ್ನು ಉಳಿಸುತ್ತೇವೆ,, ಸುಮ್ಮನೆ ಕಾರಣಗಳನ್ನು ಹುಡುಕಿ ಟೀಕೆಗಳನ್ನ ಮಾಡಿ ದೊಡ್ಡ ದೊಡ್ಡ ಫೋಸ್ ಕೊಡುವುದು ಬಿಟ್ಟು ದೇಶಕ್ಕಾಗಿ ಎಲ್ಲರೂ ಒಂದಾಗಿ ಬನ್ನಿ,,,, ಈ ದೇಶ ಎಂದಿಗೂ ನಿಮ್ಮನ್ನ ಮರೆಯಲ್ಲ, ನಿಮ್ಮ ಮನಸ್ಸಾಕ್ಷಿಯನ್ನೊಮ್ಮೆ ಕೇಳಿ ನೋಡಿ,,,,,,,,

                                                                                       ಜೈ ಹಿಂದ್,,,,,,,
                                                                                       ವಂದೇ ಮಾತರಂ,,,



No comments:

Post a Comment